ಚಿಟ್ಟಾಣಿ ಯಕ್ಷಗಾನ ಸಪ್ತಾಹ ಉದ್ಘಾಟನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 5 , 2013
|
ನವ೦ಬರ್ 5 , 2013
|
ಚಿಟ್ಟಾಣಿ ಯಕ್ಷಗಾನ ಸಪ್ತಾಹ ಉದ್ಘಾಟನೆ
ಉಡುಪಿ :
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನ ಕಲೆಗೆ ಕೊಟ್ಟ ಕೊಡುಗೆಗಾಗಿ ಸಿಕ್ಕ ಗೌರವ ನಾಡಿಗೆ ತಂದ ಕೀರ್ತಿ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಶ್ರೀಕೃಷ್ಣ ಮಠ, ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಬಂಗಾರಮಕ್ಕಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದ ಆರನೇ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.
ಚಿಟ್ಟಾಣಿ ಕಲೆಗೆ ಸಲ್ಲಿಸಿದ ಸೇವೆ ಅಪಾರವಿದ್ದು ಇದು ಕಲಾವಿದರಿಗೆ ಮಾದರಿ ಎಂದರು. ಪರ್ಯಾಯ ಸೋದೆ ಶ್ರೀವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಯಕ್ಷಗಾನ ಸಪ್ತಾಹ ಉದ್ಘಾಟಿಸಿದರು.
ಚಿಟ್ಟಾಣಿ ಅಭಿಮಾನಿ ಬಳಗದ ವತಿಯಿಂದ ಎಂ. ಗಂಗಾಧರ ರಾವ್(ನಂದ ಕುಮಾರ್) ನೀಡಿದ 35,000 ರೂ. ವೌಲ್ಯದ ಯಕ್ಷಗಾನ ವೇಷ ಭೂಷಣ ಸ್ವೀಕರಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತನಾಡಿ, ಅಭಿಮಾನಿಗಳ ಕೊಡುಗೆ ಕಲಾವಿದನ ಜವಾಬ್ದಾರಿ ಹೆಚ್ಚಿಸಿದೆ. ಅಭಿಮಾನಿಗಳಿಂದ ಕಲಾವಿದ ಉನ್ನತಿ ಹೊಂದುವುದು ಸಾಧ್ಯ ಎಂದರು.
ಉಡುಪಿಯಲ್ಲಿ ಕಲೆಗೆ ತಕ್ಕ ಬೆಲೆ, ವೌಲ್ಯವಿದೆ ಎಂದು ಹೇಳಿದರು. ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಪಿ. ನಾರಾಯಣ ಭಟ್ ಮಾತನಾಡಿ, ಜಗತ್ತಿನ ಸೃಜನಶೀಲ ಕಲೆಯಾದ ಯಕ್ಷಗಾನ ಸಂಗೀತ, ನೃತ್ಯ, ಮಾತುಗಾರಿಕೆ ಮೂಲಕ ಪ್ರಬುದ್ಧವಾಗಿದೆ ಎಂದು ನುಡಿದರು.
ಚಿಟ್ಟಾಣಿ ಅಭಿಮಾನಿ ಬಳಗದ ಕಾರ್ಯದರ್ಶಿ ಗೋಪಿಕೃಷ್ಣ ರಾವ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಕೃಪೆ : http://www.http://vijaykarnataka.indiatimes.com/
|
|
|